https://youtu.be/NHc6OMSu0K4?si=SI_K4goOPEgwo6h2

ಇ.ಕೆ.ಜಾನಕಿ ಅಮ್ಮಾಳ್ ಭಾರತದ ಪ್ರಪ್ರ ಥಮ ಮಹಿಳಾ ಸಸ್ಯಶಾಸ್ತ್ರಜ್ಞ ಮತ್ತು ಸೈಟೋಜೆನೆಟಿಸ್ಟ್. ಸಸ್ಯಶಾಸ್ತ್ರ ವಿಶ್ವ ಮಟ್ಟದಲ್ಲಿ ಹೆಸರು ಪಡೆದ ಮೊದಲ ಭಾರತೀಯ ಮಹಿಳೆಯರಲ್ಲಿ ಒಬ್ಬರು. ಇವರ ಪೂರ್ಣಹೆಸರು ಎಡವಲಾಥ್ ಕಾಕತ್ ಜಾನಕಿ ಅಮ್ಮಾಳ್. ಇವ ರು ಕೇರಳದ ತಲಶ್ಯೇರಿ ಯಲ್ಲಿ ನವೆಂಬರ್-೪, ೧೮೯೭ರಲ್ಲಿ ವಿದ್ಯಾವಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಶಿಕ್ಷಣಕ್ಕೆ ತುಂಬಾ ಮಹತ್ವ ನೀಡುತ್ತಿದ್ದರಿಂದ, ಅಮ್ಮಾಳ್ ಅವರು ಬಾಲ್ಯದಲ್ಲೇ ವಿಜ್ಞಾನ ವಿಷಯದ ಕಡೆಗೆ ತುಂಬಾ ಆಸಕ್ತಿ ಬೆಳೆಸಿಕೊಂಡರು. ಆಗಿನ ದಿನಮಾನದಲ್ಲಿ ವಿದ್ಯಾರ್ಜನೆಗೆ ಯಾವುದೇ ಸೌಲಭ್ಯಗಳು ಇರಲಿಲ್ಲ, ಅಷ್ಟೇ ಅಲ್ಲ,
ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಬರುವುದೇ ಒಂದು ದೊಡ್ಡ ಸವಾಲಾಗಿತ್ತು. ಅವರ ಕಾಲದಲ್ಲಿ ಮಹಿಳೆಯರಿಗೆ ವಿಜ್ಞಾನ ಕ್ಷೇತ್ರದಲ್ಲಿ ಅವಕಾಶ ಕಡಿಮೆ ಇತ್ತು. ಆದರೂ ಅವರು ಹಿಂಜರಿಯದೇ ತಮ್ಮ ಪ್ರತಿಭೆಯಿಂದ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದರು. ಪುರುಷ ಪ್ರಧಾನವಾದ ಅಂದಿನ ದಿನಮಾನಗಳಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದು ಮಾತ್ರ ಇಂದಿಗೂ ಸರ್ವಶ್ರೇಷ್ಟವಾಗಿದೆ. ಅಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಮಹಾನ್ ಸಾಧನೆ ಮಾಡುವ ಮೂಲಕ ದೇಶ-ವಿದೇಶದ ಮಹಿಳೆಯರ ಸಾಧನೆಗೆ ಸ್ಫೂರ್ತಿಯಾದವರು ಜಾನಕಿ ಅಮ್ಮಾಳ್. ಅದರಲ್ಲೂ ವಿಶೇಷವಾಗಿ ಭಾರತದ ಮಹಿಳಾ ವಿಜ್ಞಾನಿಗಳಿಗೆ ಪ್ರೇರಣೆ ಯಾಗಿದ್ದಾರೆ.
ಅವರ ಸಂಶೋಧನೆಗಳು ಕೃಷಿ ಮತ್ತು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ದೊಡ್ಡ ಪ್ರಭಾವ ಬೀರಿವೆ. ಅವರು ಸಸ್ಯ ವಿಜ್ಞಾನ ಮತ್ತು ತಳಿಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯ ಸೇರಿದಂತೆ ಭಾರತದ ಪ್ರಮುಖ ಕಾಲೇಜುಗಳಲ್ಲಿ ಓದಿ, ನಂತರ ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆದರು. ಅಮೆರಿಕದ ಮಿಚಿಗನ್ ವಿವಿಯಿಂದ ಡಾಕ್ಟರೇಟ್ (ಪಿಹೆಚ್ಡಿ) ಪದವಿ ಪಡೆದ ಮೊದಲ ಭಾರತೀಯ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರು. ವಿಶೇಷವಾಗಿ ಕಬ್ಬಿನ ತಳಿಗಳನ್ನು ಸುಧಾರಿಸುವ ಮೂಲಕ ಭಾರತದ ಸಕ್ಕರೆ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿದರು.
ಭಾರತದಲ್ಲಿ ವಿವಿಧ ಸಸ್ಯಗಳ ಸಂರಕ್ಷಣೆ ಮತ್ತು ಅಧ್ಯಯನದಲ್ಲಿ ಸಹಕಾರ ನೀಡಿದರು. ಅವರು ಇಂಗ್ಲೆಂಡ್ನ ರಾಯಲ್ ಹಾರ್ಟಿಕಲ್ಚರ್ ಸೊಸಾಯಿಟಿಯಲ್ಲಿ ಸಂಶೋಧನೆ ನಡೆಸಿದರು. ಅಲ್ಲಿನ ವಿಸ್ಲಿ ಗಾರ್ಡನ್ಸನಲ್ಲಿ ಸಸ್ಯ ಅಧ್ಯಯನ ಮಾಡಿದರು. ನಂತರ ಭಾರತಕ್ಕೆ ಮರಳಿ ಬಂದು ಸಸ್ಯಶಾಸ್ತ್ರ ಸಂಶೋಧನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಭಾರತದ ಸಸ್ಯಶಾಸ್ತ್ರ ಸಮೀಕ್ಷೆಯಲ್ಲಿ ಕೆಲಸ ಮಾಡಿ ಭಾರತದ ಸಸ್ಯ ವೈವಿಧ್ಯತೆಯನ್ನು ದಾಖಲಿಸಿದರು.

ಕೊಡುಗೆಗಳು: ಸಕ್ಕರೆ ಕಬ್ಬು ಕ್ಷೇತ್ರದಲ್ಲಿ ಮಹತ್ವ: ಭಾರತದಲ್ಲಿ ಬೆಳೆಯುವ ಸಕ್ಕರೆ ಕಬ್ಬು ಮತ್ತು ವಿದೇಶಿ ಪ್ರಭೇದಗಳನ್ನು ಸೇರಿಸಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದರು. ಇದರಿಂದ: ಹೆಚ್ಚು ಸಕ್ಕರೆ ಉತ್ಪಾದನೆ, ರೋಗ ನಿರೋಧಕ ಶಕ್ತಿ, ವಿಭಿನ್ನ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಹೆಚ್ಚಾಯಿತು. ಇದು ಭಾರತದ ಕೃಷಿಗೆ ದೊಡ್ಡ ಸಹಾಯವಾಯಿತು. ಸಸ್ಯಗಳ ಕ್ರೋಮೊಸೋಮ್ ಭಾರತೀಯ ಸಸ್ಯ ಸಂಪತ್ತಿನ ಸಂರಕ್ಷಣೆ: ಭಾರತದ ಸ್ಥಳೀಯ ಸಸ್ಯಗಳನ್ನು ಉಳಿಸಲು ಮತ್ತು ಅಧ್ಯಯನ ಮಾಡಲು ಮಹತ್ವದ ಕೆಲಸ ಮಾಡಿದರು. ಅವರು ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ಸರಳ ಜೀವನ ನಡೆಸಿ, ಸಂಶೋಧನೆಗೆ ತಮ್ಮ ಜೀವನವನ್ನು ಸಮರ್ಪಿಸಿದರು.
ಪ್ರಶಸ್ತಿ ಮತ್ತು ಗೌರವ: ಇವರ ಸಾಧನೆಯನ್ನು ಗುರುತಿಸಿ ೧೯೭೭ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ೨೦೦೦ರಲ್ಲಿ ಜೀವಿವರ್ಗೀಕರಣ ಶಾಸ್ತ್ರ ರಾಷ್ಟ್ರೀ ಪ್ರಶಸ್ತಿಯನ್ನು ಇವರ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಇವರ ಸಾಧನೆಯ ಗೌರವಾರ್ಥ ಮ್ಯಾಗ್ನೋಲಿಯಾ ಹೂವಿನ ಪ್ರಭೇದಕ್ಕೆ ಮ್ಯಾಗ್ನೋಲಿಯಾ ಕೋಬಸ್ ಜಾನಕಿ ಅಮ್ಮಾಳ್ ಎಂದು ಹೆಸರಿಡ ಲಾಗಿದೆ.
ಒಟ್ಟಾರೆಯಾಗಿ ಅವರ ಕೆಲಸದ ಪ್ರಭಾವದಿಂದ ಕೃಷಿ ಉತ್ಪಾದನೆ ಹೆಚ್ಚಾಯಿತು, ಹೊಸ ಸಸ್ಯ ತಳಿಗಳು ಅಭಿವೃದ್ಧಿಯಾಯಿತು, ಮಹಿಳೆಯರು ವಿಜ್ಞಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ದೊರಕಿತು, ವೈಜ್ಞಾನಿಕ ಸಂಶೋಧನೆಗಳ ಆಳವಾದ ವಿವರ ದೊರೆಯಿತು ಎಂದು ಹೇಳಿದರೆ ಅತಿಶೋಕ್ತಿ ಯಾಗಲಾರದು. ಅವರ ಜೀವನದಿಂದ ನಾವು ಕಲಿಯಬಹುದಾದ ಕೆಲವು ಪ್ರಮುಖ ಸಂಗತಿ ಗಳೆಂದರೆ-ಪರಿಶ್ರಮ ಮತ್ತು ಧೈರ್ಯದಿಂದ ದೊಡ್ಡ ಮಾತ್ರ ಸಾಧನೆ ಮಾಡಬಹುದು. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಬಹುದಾದ ಸಾಮರ್ಥ್ಯವನ್ನು ಹೊಂದಿದ್ದಾರೆ. ಪ್ರಕೃತಿ ಮತ್ತು ಪರಿಸರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ.
ಇ.ಕೆ.ಜಾನಕಿ ಅವರ ಅಧ್ಯಯನ
ಸೈಟೋಜೆನೆಟಿಕ್ಸ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆ ನಡೆಸಿದರು. ಸಸ್ಯಗಳ ಕ್ರೋಮೊಸೋಮ್ ಸಂಖ್ಯೆ ಮತ್ತು ವೈವಿಧ್ಯತೆ ಕುರಿತು ಅಧ್ಯಯನ ಮಾಡಿದರು. ಅಧ್ಯಯನದಿಂದ ಹೊಸ ಸಸ್ಯಪ್ರಭೇದ ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಹಾಗೂ ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿಯೂ ಸಹಾಯ ಮಾಡಿದರು. ಅವರು ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸಿ.ಡಿ ಡಾರ್ಲಿಂಗ್ಟನ್ ಜೊತೆಗೂಡಿ ‘ಕ್ರೋಮೊಸೋಮ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ’ ಎಂಬ ಪುಸ್ತಕ ರಚಿಸಿದರು. ಈ ಪುಸ್ತಕ ಸಸ್ಯಗಳ ಕ್ರೋಮೊ ಸೋಮ್ ಮಾಹಿತಿಗಾಗಿ ಅತ್ಯಂತ ಪ್ರಮುಖ ಉಲ್ಲೇಖವಾಗಿದೆ. ಇವರು ವಿಜ್ಞಾನಿ ಮಾತ್ರವಲ್ಲ, ಪರಿಸರ ಹೋರಾಟಗಾರ್ತಿಯೂ ಆಗಿದ್ದರು. ಭಾರತದ ಕಾಡುಗಳು ಮತ್ತು ಸ್ಥಳೀಯ ಸಸ್ಯಗಳನ್ನು ಉಳಿಸಲು ಒತ್ತಾಯಿಸಿದರು. ಕೇರಳ ಅರಣ್ಯ ಪ್ರದೇಶ ಉಳಿವಿಗೆ ಅಭಿಯಾನಕ್ಕೆ ಬೆಂಬಲ ನೀಡಿದರು. ಪರಿಸರ ಸಂರಕ್ಷಣೆಯ ಪ್ರಮುಖ ಹೋರಾಟಗಳಲ್ಲಿ ಒಂದಾಗಿದೆ.
ರಾಜು. ಭೂಶೆಟ್ಟಿ ಹುಬ್ಬಳ್ಳಿ 



More Stories
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ
ಜೈವಿಕ ರಸಾಯನಶಾಸ್ತ್ರ ಮತ್ತು ಹೆಮಟಾಲಜಿಯಲ್ಲಿ ‘ಐಎಸ್ಒ 15189:2022’ ಮಾನ್ಯತೆ ಸಾಧನೆ.
ಸಂಡೂರಿನ ನಾನಾವಟೆ ಕಾಲೇಜು ಸಾಧನೆ: ರಾಜ್ಯಕ್ಕೆ 5 ಮತ್ತು 7ನೇ ರ್ಯಾಂಕ್