April 29, 2026

Hampi times

Kannada News Portal from Vijayanagara

ಜೀವಂತ ವ್ಯಕ್ತಿಗೆ ಮರಣ ಧೃಢೀಕರಣ ಪತ್ರ ನೀಡಿದ ಪಿಡಿಒ, ನಂತರ ಏನಾಯ್ತು ಗೊತ್ತಾ?

https://youtu.be/NHc6OMSu0K4?si=SI_K4goOPEgwo6h2

HAMPI TIMES

 

ಕೊಪ್ಪಳ: ಜೀವಂತ ಇರುವ ವ್ಯಕ್ತಿಗೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯೊಬ್ಬರು ಮರಣ ಧೃಢೀಕರಣ ಪ್ರಮಾಣ ಪತ್ರ ನೀಡಿದ ಘಟನೆ ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಗ್ರಾಪಂ ವ್ಯಾಪ್ತಿಯ ಸಂಕನಾಳ ಗ್ರಾಮದ ಮಹಾಂತಪ್ಪ ಎಂಬುವವರು ಜೀವಂತ ಇದ್ದರೂ ದಿವಂಗತರಾಗಿದ್ದಾರೆಂದು ಪ್ರಮಾಣ ಪತ್ರ ನೀಡಲಾಗಿದೆ.

ಈಚೆಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಮಹಾಂತಪ್ಪ ಅವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಮಳೆಹಾನಿ ಪರಿಹಾರ ಪಡೆದುಕೊಳ್ಳುವ ವಿಷಯದಲ್ಲಿ ತಂದೆ ಹಾಗೂ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ, ಸ್ಥಳೀಯ ಮುಖಂಡ ರೊಬ್ಬರು ಹಾಗೂ ಮಕ್ಕಳು ಪಿಡಿಓ ಮೇಲೆ ಒತ್ತಡ ಹಾಕಿ ಮರಣ ದೃಢೀಕರಣ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಈಗ ತಂದೆ ಮತ್ತು ಮಗನ ಮಧ್ಯೆ ಉತ್ತಮ ಸಂಬಂಧ ಬೆಳೆದ ಹಿನ್ನೆಲೆಯಲ್ಲಿ ಈ ಮರಣ ಪ್ರಮಾಣ ಪತ್ರದ ವಿಷಯ ಬೆಳಕಿಗೆ ಬಂದಿದೆ. ಆದರೆ ಇದೇ ಕಾರಣದಿಂದ ಮಹಾಂತಪ್ಪನಿಗೆ ಬರುತ್ತಿದ್ದ ವೃದ್ಯಾಪ್ಯ ವೇತನ ನಿಂತಿದೆ ಎಂದು ಆರೋಪಿಸಲಾಗಿದೆ.ಆದರೆ, ಆಧಾರ್ ಲಿಂಕ್ ಮಾಡಿಸದಿರುವುದು, ಇವರ ಕುಟುಂಬದ ಹೆಸರಿನಲ್ಲಿ ಜಮೀನಿದ್ದು ಏಳು ತಿಂಗಳ‌ಹಿಂದೆಯೇ ಮಾಸಾಶನ ಕಡಿತಗೊಂಡಿದೆ. ಈ ಸಂಬಂಧ ಪಿಡಿಒಗೆ ತಾಪಂನಿಂದ ನೋಟಿಸ್ ಜಾರಿ ಮಾಡಲಾಗಿದೆ.

Please follow and like us:

 

 

 

 

 

Translate »
[t4b-ticker]
error: Content is protected !!