https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಜೀವನಗಾಥೆ ಆಧಾರಿತ, ಬೇಲೂರು ರಘುನಂದನ್ ನಿರ್ದೇಶನದ, ಅರುಣ್ ಕುಮಾರ್ ಅಭಿನಯದ, ಮಾತಾ ಏಕವ್ಯಕ್ತಿ ನಾಟಕದ ಪ್ರದರ್ಶನ ಶನಿವಾರ ಪಟ್ಟಣದ ದುರ್ಗಾದಾಸ ರಂಗಮಂದಿರದಲ್ಲಿ ಸಂಜೆ 7ಗಂಟೆಗೆ ಪ್ರದರ್ಶನ ಗೊಳ್ಳಲಿದೆ.


ಪ್ರದರ್ಶನವನ್ನು ಸಾಹಿತಿ ಲಲಿತಾ ಹೊಸಪ್ಯಾಟಿ ಉದ್ಘಾಟಿಸುವರು, ಮಂಜಮ್ಮ ಜೋಗತಿ ಸಭೆಯ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ರಂಗನಿರ್ದೇಶಕ ಬೇಲೂರು ರಘುನಂದನ, ಹೊಸಪೇಟೆಯ ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ, ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ, ಕ.ಸಾ.ಪ.ಹೋಬಳಿ ಅಧ್ಯಕ್ಷ ಬಿ.ಎಂ.ಎಸ್.ಮೃತ್ಯುಂಜಯ, ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ ಪಾಲ್ಗೊಳ್ಳುವರು.
Please follow and like us:



More Stories
ಪೊಲೀಸ್ ಕಲ್ಯಾಣಕ್ಕೆ ₹12.61 ಲಕ್ಷ ನೆರವು : ಎಸ್ಪಿ ಎಸ್ ಜಾಹ್ನವಿ
ಹಂಪಿ ಒಡೆಯನಿಗಿಂದು ವಿವಾಹದ ಸಂಭ್ರಮ
ಬಸವಾಮೃತ-೨ ವಚನ ವೈಭವ – ಅರಿವಿನ ಬೆಳಕು : ಬಿಎಂಆರ್