https://youtu.be/NHc6OMSu0K4?si=SI_K4goOPEgwo6h2

ನನ್ನಿನಿಯ
ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ
ಮೀನ ಹೆಜ್ಜೆಯನೀತ ಅರಿಯಬಲ್ಲ
ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು
ನಂಬಿಕೆಯ ಒಳಗಿಟ್ಟು ದುಡಿಯಬಲ್ಲ
ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು
ಕೈಕಟ್ಟಿ ಕೂರನವ ವಿಧಿಯ ಹಳಿದು

ವಿಫಲತೆಯ ಬದಿಗಿಟ್ಟು ಸಫಲತೆಗೆ ಪಣತೊಟ್ಟು
ದುಡಿಮೆಯಲಿ ಯಶ ಗಳಿಸೆ ಅವನ ಪಟ್ಟು
ಕಾಯಕವೆ ಕೈಲಾಸ ಎಂಬಂಥ ನುಡಿಮುತ್ತು
ಬದುಕಲ್ಲಿ ಅಳವಡಿಸಿ ನಡೆಯುವಾತ
ಮರೆಯುವನು ಸೋಲುಗಳ ಸಿಗದಿರದು ಗೆಲುವೆಂದು
ಸೋಲುಗಳು ಮೆಟ್ಟಿಲದು ಎಂದು ತಿಳಿದು
ಮಾತುಗಳು ರಜತವದು ಮೌನವಿದು ಬಂಗಾರ
ನನ್ನಿಯನಾ ಜೊತೆಗೆ ಬಾಳು ಶೃಂಗಾರ||
| ಪೆರ್ಮುಖ ಸುಬ್ರಹ್ಮಣ್ಯ ಭಟ್
Please follow and like us:



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಬ್ರಿಡ್ಜ್ ಟು ಬೆಂಗಳೂರು’ ಮೂಲಕ ನವಶಕ್ತಿಯ ಅನಾವರಣ
ಸಂಡೂರಿನ ನಾನಾವಟೆ ಕಾಲೇಜು ಸಾಧನೆ: ರಾಜ್ಯಕ್ಕೆ 5 ಮತ್ತು 7ನೇ ರ್ಯಾಂಕ್