https://youtu.be/NHc6OMSu0K4?si=SI_K4goOPEgwo6h2

ನನ್ನಿನಿಯ
ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ
ಮೀನ ಹೆಜ್ಜೆಯನೀತ ಅರಿಯಬಲ್ಲ
ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು
ನಂಬಿಕೆಯ ಒಳಗಿಟ್ಟು ದುಡಿಯಬಲ್ಲ
ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು
ಕೈಕಟ್ಟಿ ಕೂರನವ ವಿಧಿಯ ಹಳಿದು

ವಿಫಲತೆಯ ಬದಿಗಿಟ್ಟು ಸಫಲತೆಗೆ ಪಣತೊಟ್ಟು
ದುಡಿಮೆಯಲಿ ಯಶ ಗಳಿಸೆ ಅವನ ಪಟ್ಟು
ಕಾಯಕವೆ ಕೈಲಾಸ ಎಂಬಂಥ ನುಡಿಮುತ್ತು
ಬದುಕಲ್ಲಿ ಅಳವಡಿಸಿ ನಡೆಯುವಾತ
ಮರೆಯುವನು ಸೋಲುಗಳ ಸಿಗದಿರದು ಗೆಲುವೆಂದು
ಸೋಲುಗಳು ಮೆಟ್ಟಿಲದು ಎಂದು ತಿಳಿದು
ಮಾತುಗಳು ರಜತವದು ಮೌನವಿದು ಬಂಗಾರ
ನನ್ನಿಯನಾ ಜೊತೆಗೆ ಬಾಳು ಶೃಂಗಾರ||
| ಪೆರ್ಮುಖ ಸುಬ್ರಹ್ಮಣ್ಯ ಭಟ್
Please follow and like us:



More Stories
ಬಿಡಿಸಿಸಿ ಬ್ಯಾಂಕ್ ಗೆ ₹13.08 ಕೋಟಿ ನಿವ್ವಳ ಲಾಭ : ಕೆ.ತಿಪ್ಪೇಸ್ವಾಮಿ
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್