https://youtu.be/NHc6OMSu0K4?si=SI_K4goOPEgwo6h2

ವಾಣಿಜ್ಯ ಚಟುವಟಿಕೆ ಜೀವನಾಧಾರಕ್ಕೆ ಸಹಕಾರಿ
ಹಂಪಿ ಟೈಮ್ಸ್ ಹೊಸಪೇಟೆ:
ವಿಜಯನಗರ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ ಅವರನ್ನು ಅಭಿನಂದಿಸಿತು.

ಸಂಘದ ಅಧ್ಯಕ್ಷ ಆಶ್ವಿನ್ ಕೋತಂಬ್ರಿ ಮಾತನಾಡಿ, ವಾಣಿಜ್ಯ ಚಟುವಟಿಕೆ ಜೀವನಾಧಾರಕ್ಕೆ ಸಹಕಾರಿಯಾಗಿದ್ದು, ನೂತನ ಜಿಲ್ಲೆ ಹಾಗೂ ಕೇಂದ್ರ ಸ್ಥಾನವಾಗಿರುವ ಹೊಸಪೇಟೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಸಲ್ಲಿಸಿದರು. ವಿಜಯನಗರ ಕ್ಷೇತ್ರದ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ವಿಜಯನಗರ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘ ಕೈಜೋಡಿಸುತ್ತದೆ ಎಂದು ಶಾಸಕ ಗವಿಯಪ್ಪಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚೇಂಬರ್ಸ್ ಆಫ್ ಕಾಮರ್ಸ್ ಕಾರ್ಯದರ್ಶಿ ಕಾಕುಬಾಳು ರಾಜೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಇತರೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು .



More Stories
ಬಿಡಿಸಿಸಿ ಬ್ಯಾಂಕ್ ಗೆ ₹13.08 ಕೋಟಿ ನಿವ್ವಳ ಲಾಭ : ಕೆ.ತಿಪ್ಪೇಸ್ವಾಮಿ
ಎಂ.ಪಿ. ಪ್ರಕಾಶ ಅಧಿಕಾರಕ್ಕಿಂತ ಮೌಲ್ಯಗಳಿಗೆ ಬೆಲೆ ನೀಡಿದ ಮಹಾನ್ ನಾಯಕ: ಮಾಜಿ ಸಿಎಂ ಸಿದ್ದರಾಮಯ್ಯ
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ