https://youtu.be/NHc6OMSu0K4?si=SI_K4goOPEgwo6h2

- HAMPI TIMES
ಹೊಸಪೇಟೆ : ನಗರದ ಶುಭಾಕಾಂಕ್ಷಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಸಂಭ್ರಮ ಟ್ಯುಟೋರಿಯಲ್ ನಿಂದ ಅಮರಾವತಿ ಚಂದ್ರಮೌಳೇಶ್ವರ ದೇವಸ್ಥಾನ ಬಳಿ ಗುರುವಾರ “ಉಚಿತ ದಂತ ತಪಾಸಣೆ” ಶಿಬಿರ ಜರುಗಿತು.


ವೈದ್ಯರಾದ ಡಾ. ರಾಘವೇಂದ್ರ ಕಟ್ಟಿ, ಡಾ. ಮಂಜುಳಾ ಕಟ್ಟಿ,ಡಾ.ಸ್ಪೂರ್ತಿ ಮತ್ತು ಡಾ. ಗುಣಪ್ರಿಯ ತಪಾಸಣೆ ಮಾಡಿ, ಚಿಕಿತ್ಸೆಯೊಂದಿಗೆ ಸಲಹೆ ನೀಡಿದರು.
ಪೋಷಕರು ಹಾಗೂ ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದರು.

ಸಂಸ್ಥೆಯ ಅಧ್ಯಕ್ಷ ಪ್ರಸನ್ನ ತೈಲಂಗ್, ಮುಖ್ಯ ಶಿಕ್ಷಕಿ ಶಾಲಿನಿ. ಪಿ. ಉಪಸ್ಥಿತರಿದ್ದರು.
ಅದೇ ಶಾಲೆಯ ಶಿಕ್ಷಕಿ ಅನಿತಾ, ಅಂಕಿತಾ, ಸುಷ್ಮಾ ಕಾರ್ಯಕ್ರಮ ನಿರ್ವಹಿಸಿದರು. ಅನುಷಾ ಪ್ರಾರ್ಥಿಸಿದರು. ಅದೇ ಶಾಲೆಯ ಮಕ್ಕಳು ಭಗವದ್ಗೀತೆ ಹೇಳಿದರು.
Please follow and like us:



More Stories
ಬಿಡಿಸಿಸಿ ಬ್ಯಾಂಕ್ ಗೆ ₹13.08 ಕೋಟಿ ನಿವ್ವಳ ಲಾಭ : ಕೆ.ತಿಪ್ಪೇಸ್ವಾಮಿ
ಎಂ.ಪಿ. ಪ್ರಕಾಶ ಅಧಿಕಾರಕ್ಕಿಂತ ಮೌಲ್ಯಗಳಿಗೆ ಬೆಲೆ ನೀಡಿದ ಮಹಾನ್ ನಾಯಕ: ಮಾಜಿ ಸಿಎಂ ಸಿದ್ದರಾಮಯ್ಯ
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ