July 16, 2025

Hampi times

Kannada News Portal from Vijayanagara

ಚುನಾವಣೆ ಕಾರ್ಯ ನಿರಾಕರಣೆ  ಇಬ್ಬರು ಶಿಕ್ಷಕಿಯರ ಅಮಾನತ್ತು : ಡಿಸಿ ಆದೇಶ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ

ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿರಾಕರಣೆ ಮತ್ತು‌ ಬೇಜವಾಬ್ಧಾರಿ  ತೋರಿದ ಮೇರೆಗೆ ಇಬ್ಬರು ಶಿಕ್ಷಕಿಯರನ್ನು ತಕ್ಷಣದಿಂದಲೇ  ಸೇವೆಯಿಂದ ಅಮಾನತ್ತುಗೊಳಿಸಿ  ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್. ದಿವಾಕರ ಆದೇಶ ಹೊರಡಿಸಿದ್ದಾರೆ.

ಕೂಡ್ಲಿಗಿ ಕ್ಷೇತ್ರದ ಗುಡೆಕೋಟೆ ಹೋಬಳಿಯ ಮತಗಟ್ಟೆ ಸಂಖ್ಯೆ 119 ಕ್ಕೆ ಬಿಎಲ್‌ಒ ಆಗಿ‌ ನಿಯೋಜನೆಗೊಂಡಿದ್ದ ವಡ್ಡರಹಟ್ಟಿ ಸಿದ್ದಾಪುರ ಸ.ಹಿ.ಪ್ರಾ.ಶಾಲೆ ಶಿಕ್ಷಕಿ ಸುನಂದ ನ್ಯಾಮತಿ ಮತ್ತು  ಮತಗಟ್ಟೆ ಸಂಖ್ಯೆ 120ಕ್ಕೆ ಬಿಎಲ್ ಒ ಆಗಿ ನಿಯೋಜನೆಗೊಂಡಿದ್ದ ಕೂಡ್ಲಿಗಿ ತಾಲೂಕಿನ ಗುಂಡಮುಣಗು ಸ.ಮಾ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಮಮತಾ ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿದ್ದಾರೆ. ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಲಾಗಿದ್ದು, ಅನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆಯುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆದೇಶದಲ್ಲಿ‌ ತಿಳಿಸಿದ್ದಾರೆ.

 

ಜಾಹೀರಾತು
error: Content is protected !!