https://youtu.be/NHc6OMSu0K4?si=SI_K4goOPEgwo6h2
ಪಂಚಮಸಾಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೀಠದಿಂದ ತರಬೇತಿ : ವಚನಾನಂದ ಮಹಾಸ್ವಾಮಿಗಳು
ಹಂಪಿ ಟೈಮ್ಸ್ ಕೊಟ್ಟೂರು
ಐಎಎಸ್, ಕೆಎಎಸ್ ಹಾಗೂ ಐಪಿಎಸ್ ಆಗುವ ಇಚ್ಚೆಯುಳ್ಳ ಪಂಚಮಸಾಲಿ ಪ್ರತಿಭಾವಂತ ಬಡ ಮಕ್ಕಳಿಗೆ ಪೀಠದ ಕಾಣಿಕೆಯಲ್ಲಿ ತರಬೇತಿ ಕೊಡಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪ್ರಸ್ತುತ ವರ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರದ ಪಂಚಮಸಾಲಿ ಪೀಠಾದ್ಯಕ್ಷರು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ಧೇಶ್ವರ ಸಭಾಂಗಣದಲ್ಲಿ ಭಾನುವಾರ ಪಂಚಮಸಾಲಿ ಸಮಾಜ ಕೊಟ್ಟೂರು ತಾಲೂಕು ಘಟಕ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನದಲ್ಲಿ ಮಾತನಾಡಿದರು. ಸಮಾಜದ ಇಬ್ಬರು ವಿದ್ಯಾರ್ಥಿನಿಯರು ವಾಣಿಜ್ಯ ವಿಭಾಗದಲ್ಲಿ ರ್ಯಾಂಕ್ ಪಡೆದಿದ್ದರು ನಮ್ಮನ್ನು ಪರಿಗಣಿಸುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ಕಿಯಿಸಿದ ಜಗದ್ಗುರುಗಳು, ೧೦ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ವ್ಯವಸ್ಥೆ ನರೇಂದ್ರ ಮೋದಿ ಅವರ ಆಗಮನದಿಂದ ೫ನೇ ಸ್ಥಾನಕ್ಕೆ ಬಂದು ತಲುಪಿದೆ ಇದಕ್ಕೆ ಕಾರಣ ಸುವ್ಯವಸ್ಥಿತ ವಾಣಿಜ್ಯ ವಿಭಾಗ, ಸುವ್ಯವಸ್ಥಿತ ಆರ್ಥಿಕ ವ್ಯವಸ್ಥೆ ಇಲ್ಲದಿದ್ದರೆ ದೇಶದ ಆಡಳಿತ ಕುಸಿದು ಬೀಳುತ್ತೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ ಖಿನ್ನತೆ ಭಾವನೆ ಬೇಡ ಎಂದು ಉತ್ತೇಜಿಸಿದರು.
ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ಅವರು ಪೈಲಟ್ ಆಗಬೇಕೆಂದು ಕನಸು ಕಂಡವರು ಆದರೆ ಅದು ಅವರಿಗೆ ದೊರೆಯದೆ ಇದ್ದಾಗ, ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡರು ಅವರು ಶ್ರೇಷ್ಠ ವಿಜ್ಞಾನಿ ಆದರು, ಆದೇ ರೀತಿ ವಿದ್ಯಾರ್ಥಿಗಳು ಕೂಡಾ ಕೆಲ ಕೋರ್ಸಿಗೆ ಅಂಟಿಕೊಂಡು ಖಿನ್ನತೆಗೀಡಾಗದೆ ಪರ್ಯಾಯ ಕೋರ್ಸ್ ತೆಗೆದುಕೊಂಡು ಕನಸಿನ ಗುರಿಯತ್ತ, ಹೆಜ್ಜೆ ಹಾಕಬೇಕು. ದೊಡ್ಡ ಕನಸಿನೊಂದಿಗೆ ಮುನ್ನುಗ್ಗಬೇಕು. ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪಂಚಮಸಾಲಿ ಕೊಟ್ಟೂರು ತಾಲೂಕು ಘಟಕದ ಕಾರ್ಯ ಶ್ಲಾಘನೀಯ ಎಂದು ಪ್ರಶಂಶಿಸಿದರು.
ವಕೀಲರು ಹಾಗೂ ವೀ.ಲಿಂ.ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಪಾಟೇಲ್ ಮಾತನಾಡಿ, ಮಕ್ಕಳಿಗೆ ಅಂಕ ಪಟ್ಟಿ ಜೊತೆಗೆ ಸಂಸ್ಕಾರದ ಪಾಠಗಳು ಪ್ರಸ್ತುತ ಅವಶ್ಯವಿದೆ. ಮಕ್ಕಳನ್ನು ಮೊಬೈಲ್ ಗೀಳಿಗೆ ಬಿಡದೆ, ಪ್ರೀತಿ ವಾತ್ಸಲ್ಯದ ಮೂಲಕ ತಮ್ಮ ಮಕ್ಕಳು ತಮ್ಮೊಡನೆ ಮತ್ತು ನೆರೆಯವರೊಡನೆ ಕಾಲಕಳೆಯುವಂತ ಪರಿಸರವನ್ನು ನಿರ್ಮಾಣ ಮಾಡಿ ಎಂದರು.
ವೀ.ಲಿಂ.ಪಂ.ಸಮಾಜದ ರಾಜ್ಯಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, ಸಮಾಜದ ಮಕ್ಕಳಿಗೆ ಮತ್ತು ವ್ಯಕ್ತಿಗೆ ನೀನು ಎತ್ತರೆತ್ತರಕ್ಕೆ ಬೆಳೆ ನಿನ್ನೊಂದಿಗೆ ಪಂಚಮಸಾಲಿ ಸಮಾಜ ವಿದೆ ಎಂಬುದಕ್ಕೆ ಈ ಪುರಸ್ಕಾರ ಸಾಕ್ಷಿ. ೨೦ ವರ್ಷಗಳಿಂದ ಪ್ರತಿಭಾವಂಥ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಆದರೆ ಇಲ್ಲಿ ಪುರಸ್ಕಾರ ಪಡೆದ ಅನೇಕರು ಗೌರವಯುತ ಸ್ಥಾನದಲ್ಲಿದ್ದಾರೆ. ಉನ್ನತ ಸ್ಥಾನಮಾನಗಳನ್ನು ಗಳಿಸಿದ ವ್ಯಕ್ತಿಗಳು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಹಗರಿಬೊಮ್ಮನಹಳ್ಳಿ ತಾ.ಅಧ್ಯಕ್ಷ ಅಕ್ಕಿ ಶಿವಣ್ಣ, ರಾಜ್ಯ ಪ್ರತಿನಿಧಿ ಡಿ.ಶಿವಚರಣ, ಪಟ್ಟಣ ಪಂಚಾಯಿತಿ ಸದಸ್ಯೆ ವೀಣಾ ವಿವೇಕನಂದಗೌಡ ಮಾತನಾಡಿದರು. ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷ ಚಾಪಿಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಮಸಾಲಿ ಸಮಾಜದ ಪ್ರಗತಿಪರ ರೈತರನ್ನು ಮತ್ತು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ೪೮ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರು ಮರಬದ ಶಿವಣ್ಣ, ಪದಾಧಿಕಾರಿಗಳಾದ ಹೆಚ್.ಅಶೋಕ್, ಕೆ.ಹೆಚ್.ಕಲ್ಲೇಶಪ್ಪ, ಶೆಟ್ಟಿ ರಾಜಶೇಖರ್, ವಿವೇಕಾನಂದ ರಾಂಪುರ, ಮಲ್ಲೇಶಪ್ಪ ಹುಲ್ಲುಮನಿ, ಎಸ್.ಎಸ್.ಅಶೋಕ ಇಂಜಿನಿಯರ್, ಬಸಾಪುರದ ಪಂಪಾಪತಿ, ಉಮಾದೇವಿ ದೇವರ ಮನಿ, ಡಾ.ರಾಕೇಶ್, ನಿವೃತ್ತ ಪ್ರಾಧ್ಯಾಪಕರು ಮಲ್ಲಿಕಾರ್ಜುನ, ನಿವೃತ್ತ ಉಪ ತಹಶಿಲ್ದಾರ ನಾಗರಾಜ್, ಸೇರಿದಂತೆ ಇತರರು ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಸಮಾಜದ ಬಂಧುಗಳು ಆಗಮಿಸಿದ್ದರು. ಮಂಜುನಾಥ, ಶಿಕ್ಷಕ ಹಳ್ಳಿ ಆನಂದ, ಕೋಡಿಹಳ್ಳಿ ವೀರಭದ್ರಪ್ಪ ನಿರ್ವಹಿಸಿದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ