February 10, 2025

Hampi times

Kannada News Portal from Vijayanagara

ಡಾ.ಸಿ.ಎನ್.ಮಂಜುನಾಥ, ಜಿ.ಕೃಷ್ಣಪ್ಪ, ಎಸ್.ಷಡಾಕ್ಷರಿ ಇವರಿಗೆ ರಾಜ್ಯಪಾಲರಿಂದ ನಾಡೋಜ ಗೌರವ ಪ್ರದಾನ

 

https://youtu.be/NHc6OMSu0K4?si=SI_K4goOPEgwo6h2

ವೈದ್ಯಕೀಯ, ಸಾಹಿತ್ಯ, ಸಮಾಜ ಸೇವೆಗೆ ಒಲಿದ ನಾಡೋಜ ಗೌರವ

ಹಂಪಿಟೈಮ್ಸ್

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ಮಂದಿರಲ್ಲಿ ಗುರುವಾರ  ಸಂಜೆ ಜರುಗಿದ ಕನ್ನಡ ವಿವಿ 31 ನುಡಿಹಬ್ಬದಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್,  ಹಿರಿಯ ಸಾಹಿತಿ ಕೃಷ್ಣಪ್ಪ ಜಿ. ಹಾಗೂ ಬರಹಗಾರ ಎಸ್. ಷಡಕ್ಷರಿ ಅವರಿಗೆ  ರಾಜ್ಯಾಪಾಲ ಥಾವರಚಂದ್ ಗೆಹಲೋತ್ ಅವರು ನಾಡೋಜ ಗೌರವ ಪದವಿ ಪ್ರದಾ‌ನ ಮಾಡಿದರು.

ಸಾಹಿತಿ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಘಟಿಕೋತ್ಸವ ಭಾಷಣ ಮಾಡಿದರು.ಹಾಸನ ಮೂಲದ ಡಾ.ಸಿ.ಎನ್. ಮಂಜುನಾಥ್ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ, ಸಾಹಿತ್ಯ ಕೃಷಿ ಗುರುತಿಸಿ ಬೆಂಗಳೂರಿನ ಕೃಷ್ಣಪ್ಪ ಜಿ. ಅವರಿಗೆ ಮತ್ತು  ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಬರಹಗಾರರಾದ ಚಿಕ್ಕಬಳ್ಳಾಪುರ ಜಿಲ್ಲೆ ತುಳವನೂರು ಗ್ರಾಮದ ಎಸ್. ಷಡಕ್ಷರಿ ಸೇರಿ ಮೂವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಯಿತು.

ಕನ್ನಡ ವಿವಿ ಕುಲಪತಿ  ಡಾ.ಸ.ಚಿ.ರಮೇಶ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಡೀನರು  ಇದ್ದರು. ಇದೇ ಸಂದರ್ಭದಲ್ಲಿ  ಪಿಎಚ್ ಡಿ, ಡಿ.ಲಿಟ್, ಎಂ.ಎ.ಪಿಎಚ್ .ಡಿ. ಪದವಿ ಪ್ರದಾನ ಮಾಡಲಾಯಿತು.

 

 

ಜಾಹೀರಾತು
error: Content is protected !!