June 14, 2025

Hampi times

Kannada News Portal from Vijayanagara

ಆಯುಷ್ಮಾನ್ ಬಿ.ಪಿ.ಎಲ್ ಕಾರ್ಡ್‍ದಾರರಿಗೆ 5ಲಕ್ಷದವರೆಗೆ ಚಿಕಿತ್ಸೆ: ಡಾ.ದಿಲೀಷ್ ಶಶಿ

ಆಯುಷ್ಮಾನ್ ಬಿ.ಪಿ.ಎಲ್ ಕಾರ್ಡ್‍

https://youtu.be/NHc6OMSu0K4?si=SI_K4goOPEgwo6h2

 

ಹೊಸಪೇಟೆ: ದಿನನಿತ್ಯಕೂಲಿ ಕೆಲಸ ಮಾಡುವಂತಹ ವ್ಯಕ್ತಿಗೆ ಯಾವುದಾದರೂ ಖಾಯಿಲೆ ಬಂದರೆ ದುಬಾರಿ ಚಿಕಿತ್ಸೆ ಪಡೆಯುವ ಶಕ್ತಿ ಅವನಲ್ಲಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡ್ ಅನ್ನು ಪಡೆಯುವುದರಿಂದ ರೂ.5ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಒನ್‍ನ ಪ್ರಾಂಚೈಸಿದಾರರು ಹಾಗೂ ನ್ಯಾಯಬೆಲೆ ಅಂಗಡಿಯವರು ವಿಶೇಷ ಅಸಕ್ತಿ ವಹಿಸಬೇಕು ಎಂದು ಇಡಿಸಿಎಸ್ ನಿರ್ದೇಶಕರಾದ ಡಾ.ದಿಲೀಷ್ ಶಶಿ ಅವರು ಹೇಳಿದರು.

ಆಯುಷ್ಮಾನ್ ಬಿ.ಪಿ.ಎಲ್ ಕಾರ್ಡ್‍

ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ “ಆಯುμÁ್ಮನ್ ಭಾರತ್-ಆರೋಗ್ಯ ಕರ್ನಾಟಕ” ಆರೋಗ್ಯ ಸೇವೆ ಕಾರ್ಡ್‍ಗಳನ್ನು ಒದಗಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ರೂ.5ಲಕ್ಷದವರೆಗೆ ಬಿಪಿಎಲ್ ಕುಟುಂಬದವರು ಉಚಿತ ಚಿಕಿತ್ಸೆ ಪಡೆಯಬಹುದು.
ಗ್ರಾಮ ಒನ್ ಪ್ರಾರಂಭವಾಗಿ 8ತಿಂಗಳ ಅವಧಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 1ಕೋಟಿ ಆರೋಗ್ಯ ಕಾರ್ಡ್‍ನ್ನು ವಿತರಿಸಿದ್ದು, ಇದನ್ನು 5ಕೋಟಿವರೆಗೆ ವಿತರಿಸುವ ಗುರಿ ಹೊಂದಲಾಗಿದೆ.
ವಿಜಯನಗರ ಜಿಲ್ಲೆಯಲ್ಲಿ 121 ಗ್ರಾಮಒನ್ ಪ್ರಾಂಚೈಸಿದಾರರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾದ್ಯಂತ ಪ್ರತಿಯೊಬ್ಬ ನಾಗರೀಕರಿಗೂ ಆಯುμÁ್ಮನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡ್ ವಿತರಿಸುವ ಭಾಗವಾಗಿ ಗ್ರಾಮಒನ್‍ನ ಪ್ರಾಂಚೈಸಿದಾರರು ಹಾಗು ನ್ಯಾಯಬೆಲೆ ಅಂಗಡಿಯವರು ಪ್ರತಿ ದಿನ 300ಕ್ಕಿಂತ ಹೆಚ್ಚು ನೊಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಗ್ರಾಮಒನ್ ಕೇಂದ್ರಗಳ ಪ್ರಾಂಚೈಸಿದಾರರು ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳು ಸ್ಥಳಗಳು ಹಾಗೂ ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ತೆರಳಿ ಆರೋಗ್ಯ ಕಾರ್ಡ್‍ಗಳನ್ನು ನೊಂದಣಿ ಮಾಡಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 

ಆಯುಷ್ಮಾನ್ ಬಿ.ಪಿ.ಎಲ್ ಕಾರ್ಡ್‍

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಸೇವಾಸಿಂಧು ಹಾಗೂ ಗ್ರಾಮಒನ್‍ನ ನಿರ್ದೇಶಕರಾದ ವರಪ್ರಸಾದ್ ರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗಣ್ಣನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಆಹಾರ ಶಿರಸ್ತೇದಾರ್ ಹೆಚ್.ನಾಗರಾಜ, ಗ್ರಾಮಒನ್‍ನ ಜಿಲ್ಲಾ ವ್ಯವಸ್ಥಾಪಕರಾದ ಶಬರೀಶ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ರಾಮಒನ್‍ನ ಪ್ರಾಂಚೈಸಿದಾರರು ಮತ್ತು ನ್ಯಾಯಬೆಲೆ ಅಂಗಡಿಯ ಮಾಲೀಕರು ಮತ್ತು ಇನ್ನೀತರರು ಇದ್ದರು.

 

ಜಾಹೀರಾತು
error: Content is protected !!